Union Budget 2025; ರಾಜ್ಯ ರೈಲ್ವೇ ಖಾತೆ ಸಚಿವರು ನಮ್ಮ ರಾಜ್ಯದವರೇ!.. ಆಲಮಟ್ಟಿ ಯಾದಗಿರಿ ರೈಲ್ವೆ ಮಾರ್ಗ ಯಶಸ್ವಿಗೆ ಸಿಗ್ನಲ್ ಕೊಡುತ್ತಾರೆಯೇ ಸಚಿವ ವಿ.ಸೋಮಣ್ಣ ?

Bhima Samskruthi
By -
0
         ವರದಿ:- ಮಹಾಂತೇಶ್ ಬಾಗಲಕೋಟ                                   ಮುದ್ದೇಬಿಹಾಳ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ನಲ್ಲಿಯೇ ಸಾರಿಗೆ ವಲಯಕ್ಕೆ ಯಾವ ಯಾವ ಕೊಡುಗೆ ಸಿಗಬಹುದು? ಎಂದು ಈಗ ಲೆಕ್ಕಾಚಾರ ಹಾಕಲಾಗುತ್ತಿದೆ.

ಬಜೆಟ್‌ನಲ್ಲಿ ಸಾರಿಗೆ ವಲಯದ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಭೂ ಸಾರಿಗೆಯಿಂದ ಗಮನವನ್ನು ರೈಲ್ವೆ ಕಡೆಗೆ ಹೆಚ್ಚು ಹರಿಸುತ್ತಿದ್ದು, ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ನೀಡುವ ನಿರೀಕ್ಷೆ ಇದೆ.ಪ್ರಧಾನಿ ಅವರು ರಸ್ತೆ ಸಾರಿಗೆ ಮಾದರಿಯಲ್ಲಿಯೇ ರೈಲ್ವೆ ಸೇವೆಗಳಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಆದ್ದರಿಂದ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಯ ಆಧುನೀಕರಣ, ಪ್ರಯಾಣಿಕರ ಸುರಕ್ಷತೆ, ರೈಲು ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನ: ರೈಲ್ವೆ ಮತ್ತು ಭೂ ಸಾರಿಗೆ ವಲಯಕ್ಕೆ ಎಷ್ಟು ಅನುದಾನ ನೀಡಲಾಗುತ್ತದೆ? ಎಂಬ ಚರ್ಚೆಗಳು ಸಾಗಿವೆ. ಇಂತಹ ಹೊತ್ತಿನಲ್ಲಿ ಅಧಿಕಾರಿಗಳು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ರೈಲ್ವೆ ವಲಯಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಾರಿಗೆ ಸೇವೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂಬ ಮಾಹಿತಿ ಇದೆ.

2027ರ ಮಾರ್ಚ್‌ ವೇಳೆಗೆ ದೇಶದಲ್ಲಿ 400 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಬೇಕು ಎಂದು ಗುರಿ ಹೊಂದಲಾಗಿದೆ. ಅಲ್ಲದೇ ರೈಲಿನಲ್ಲಿ ಸರಕು ಸಾಗಾಟಕ್ಕೆ ಸಹ ಆದ್ಯತೆ ನೀಡಬೇಕು, ಆ ಮೂಲಕ ಆದಾಯ ಸಂಗ್ರಹಣೆ ಮಾಡಲು ಚಿಂತಿಸಲಾಗಿದ್ದು, ಈ ಕುರಿತು ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ.

ರಸ್ತೆ ಮತ್ತು ಭೂ ಸಾರಿಗೆ ಇಲಾಖೆಗೆಯ ಅನುದಾನ ಈ ಬಾರಿ ಶೇ 3 ರಿಂದ 4ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಅಲ್ಲದೇ ಭೂ ಸಾರಿಗೆ ಜಾಲವನ್ನು 146,000 ಕಿ. ಮೀ.ಗೆ ವಿಸ್ತರಣೆ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ರೈಲ್ವೆ ಜಾಲ 68,000 ಕಿ. ಮೀ.ಗೂ ಅಧಿಕವಾಗಿದ್ದು, ಅದನ್ನು ವಿಸ್ತರಿಸುವ ಸಾಧ್ಯತೆ ಇದೆ.

ವಿವಿಧ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನದ ಕಾರಣ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬಜೆಟ್‌ನಲ್ಲಿ ರೈಲ್ವೆ ಇಲಾಖೆಯ ಆದಾಯವನ್ನು ಶೇ 2 ರಿಂದ 3ಕ್ಕೆ ಏರಿಕೆ ಮಾಡಿದರೆ ಭೂ ಸ್ವಾಧೀನ ಚುರುಕುಗೊಳಿಸಿ ಯೋಜನೆಯನ್ನು ಕಾರ್ಯಗತಗೊಳಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ರಾಷ್ಟ್ರೀಯ ರೈಲು ಯೋಜನೆ 2030ರ ಅಡಿ ರೈಲ್ವೆ ಇಲಾಖೆಯ ಆಧುನೀಕರಣಕ್ಕೆ ಹಲವಾರು ಯೋಜನೆ ರೂಪಿಸಲಾಗುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರಯಾಣಿಕರ ಸೌಲಭ್ಯಗಳು, ನಿಲ್ದಾಣದ ಅಭಿವೃದ್ಧಿ, ರೈಲು ಸಂಪರ್ಕ ಜಾಲ ವಿಸ್ತರಣೆ ಇದರಲ್ಲಿ ಸೇರಿವೆ.

ಇನ್ನು ವಿಜಯಪುರ ಬಾಗಲಕೋಟ ಜಿಲ್ಲೆ ಸೇರಿದಂತೆ ಅನೇಕ ರೈಲ್ವೆ ಯೋಜನೆಗಳು ಅಭಿವೃದ್ಧಿಪಡಿಸಲು ಬಾಕಿ ಇರುವುದರಿಂದ ಇದಕ್ಕೆ ಕೇಂದ್ರ 2025ರ ರೈಲ್ವೆ ಬಜೆಟ್ ನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ.

ಆಲಮಟ್ಟಿ ಆಣೆಕಟ್ಟಿನಿಂದ ಯಾದಗಿರಿ ವರೆಗಿನ ರೈಲ್ವೆ ಮಾರ್ಗಕ್ಕೆ ಈಗಾಗಲೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅನೇಕ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೋರಾಟಗಾರರು ಮನವಿಯನ್ನ ಸಲ್ಲಿಸುತ್ತಿದ್ದಾರೆ.

 ಈ ಬಜೆಟ್ ನಲ್ಲಿ ಮುದ್ದೇಬಿಹಾಳ ಜನತೆಗೆ ಸಿಹಿ ಸುದ್ದಿ ನೀಡುತ್ತಾರಾ ? ಕೇಂದ್ರ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ?


Tags:

Post a Comment

0Comments

Post a Comment (0)